ಗರುಡನೂ ಗೂಬೆಯೂ

ಗರುಡನೂ ಗೂಬೆಯೂ

ಒಬ್ಬ ರಾಜನನ್ನು ಆರಿಸಿಕೊಳ್ಳಬೇಕೆಂದು ಹಕ್ಕಿಗಳೆಲ್ಲವೂ ಸಭೆ ಸೇರಿದವು. ಗೂಬೆಯು ಅವರಿವರಿಗೆ ಲಂಚಕೂಟ್ಟು, “ನನ್ನನ್ನು ದೊರೆಯನ್ನು ಮಾಡಿರಿ” ಎಂದು ಹೇಳಿಕೊಂಡಿತು. ಲಂಚವನ್ನು ತೆಗಿದುಕೊಂಡಿದ್ದ ಹಕ್ಕಿಗಳೆಲ್ಲವೂ ನಮಗೆ “ಗೂಬೆಯೇ ಆರಸಾಗಬೇಕು” ಎಂದವು.

ಇದೆಲ್ಲಾ ನಡೆಯುವವರೆಗೂ ಕಾಗೆಯು ಒಂದು ಮೂಲೆಯಲ್ಲಿ ಕುಳಿತಿತ್ತು. “ಕೊಳಕನಾದ ಗೂಬೆಯು ದೊರೆಯಾಗುವುದೆಂದರೇನು?” ಎಂದು ಎಲ್ಲರಿಗೂ ಅಸಹ್ಯವಾಗಿತ್ತು. ಆದರೂ ಮಾತನಾಡದೆ ಎಲ್ಲರೂ ಸುಮ್ಮನಿದ್ದರು. ಆಗ ಕಾಗೆಯು ಎದ್ದು ನಿಂತುಕೊಂಡು “ಸ್ವಾಮಿ! ಕೊಂಚ ತಡೆಯಿರಿ. ಗೂಬೆಯನ್ನು ಎಲ್ಲರೂ ಕೊಂಚ ಕಣ್ಣಿಟ್ಟು ನೋಡಿರಿ. ಜಗತ್ತಿನಲ್ಲಿ ಇಂತಹ ಕೊಳಕು ಹಕ್ಕಿಯು ಇನ್ನು ಉಂಟೆ? ಮುಖವನ್ನು ತೊಳೆದು ಎಷ್ಟು ದಿವಸವಾಯಿತೋ? ಮೈಯ್ಯನ್ನು ತೊಳೆವುದಂತೂ ಉಂಟೋ ಇಲ್ಲವೇ ಇಲ್ಲವೋ? ಆ ಕಣ್ಣುಗಳನ್ನು ನೋಡಿ. ಜಿಬರು ಗುಡ್ಡೆ ಗುಡ್ಡೆಯಾಗಿದೆ. ಮೂಗು ನೋಡಿ. ಸಿಂಬಳವು ಹರಿಯುತ್ತಿದೆ. ಇಂತಹ ಶೊಬಚನನ್ನು ಅರಸಾಗಿ ಮಾಡಿಕೊಂಡರೆ ಎಲ್ಲರೂ ನಗುವರು. ಅತ್ತ ನೋಡಿ. ಶುಚಿವಂತನಾದ ಗರುಡನು ಕುಳಿತಿರುವನು. ಯಾವಾಗ ನೋಡಿದರೂ ಮಡಿಯಾಗಿಯೇ ಇರುವನು. ಆತನನ್ನು ನೋಡಿದರೆ ಎಷ್ಟು ಸಂತೋಷವಾಗುವುದು! ಆತನ ಶುಚಿಯನ್ನು ನೋಡಿಯೇ ಭಗವಂತನಾದ ವಿಷ್ಣುವೂ ಆತನನ್ನು ಮೆಚ್ಚಿಕೊಂಡಿರುವನು. ಆತನನ್ನೇ ದೊರೆಯನ್ನು ಮಾಡಬೇಕು. ಈ ಕೊಳಕನನ್ನು ಹೊರಕ್ಕೆ ನೂಕಬೇಕು” ಎಂದಿತು. ಉಳಿದ ಹಕ್ಕಿಗಳು “ಹೌದು. ಗೂಬೆಯನ್ನು ನೂಕಿ. ಗರುಡನಿಗೇ ಪಟ್ಟಿಕಟ್ಟರಿ” ಎಂದವು. ಎಲ್ಲರೂ ಸೇರಿ ಹಾಗೆಯೇ ಮಾಡಿದರು. ಅರಸುತನವು ಗೂಬೆಗೆ ತಪ್ಪಿ ಗರುಡನಿಗೇ ಆಯಿತು.

“ತನ್ನ ಕೊಳಕುತನದಿಂದ ದೊರೆತನವನ್ನು ತಪ್ಪಿಸಿಕೂಂಡನು” ಎಂದು ಎಲ್ಲರೂ ಹಾಸ್ಯ ಮಾಡುವರು ಎಂದೋ ಏನೋ, ಗೂಬೆಯು ಈಗಲೂ ಹಗಲಿನಲ್ಲಿ ಹೊರಗೆ ಬರುವುದಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸ್ವಚ್ಛ ಭಾರತ್
Next post ಏ ಕ್ರೂರಿ ಹೆಣ್ಣೆ ತುಸು ಕಿವಿಗೊಡು ವಿವೇಕಕ್ಕೆ

ಸಣ್ಣ ಕತೆ

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

cheap jordans|wholesale air max|wholesale jordans|wholesale jewelry|wholesale jerseys